ನಮ್ಮಲ್ಲಿ ಈ ಬಾರಿ ಚುನಾವಣೆಯ ಕಾವು ಏರುತ್ತಿರುವಂತೆ ವಾತಾವರಣ ತಂಪು ಮಾಡಲು ಅಲ್ಲಲ್ಲಿ ಮಳೆ ಸುರಿಯಲಾರಂಭಿಸಿದೆ.
ಕಾಂಗ್ರೆಸ್ನಲ್ಲಿ ಜನಾರ್ಧನ ಪೂಜಾರಿ,ಬಿ.ಜೆ.ಪಿನಲ್ಲಿನ ನಳಿನ್ ಕುಮಾರ್ ,ಸಿ.ಪಿ.ಎಂ ನ ಮಾಧವ ಚುನಾವಣ ಕಣದಲ್ಲಿನ ರಾಷ್ಟ್ರೀಯಪಕ್ಷದ ಅಭ್ಯರ್ಥಿಗಳು.ಇವರೆಲ್ಲರ ಜೊತೆಗೆ ಪುತ್ತೂರಿನ ರಾಮಭಟ್ಟ್ ಕೂಡ ಸ್ವಾಭಿಮಾನಿ ವೇದಿಕೆ ಮೂಲಕ ಸ್ಪರ್ಧಿಸುತ್ತಿದ್ದಾರೆ.ಒಂದೊಮ್ಮೆ ಬಿ.ಜೆ.ಪಿ ಶಾಸಕನಾಗಿ ರಾಷ್ಟ್ರ ನಾಯಕರ ಸಂಪರ್ಕದಲ್ಲಿದ್ದ ಹಿರಿಯ ನಾಯಕನ ಕೆರಳಿದ "ಸ್ವಾಭಿಮಾನ"ಕ್ಕೆ ಕಳೆದ ವಿಧಾನಸಭ ಚುನಾವಣೆಯಲ್ಲಿ ಅನೀರೀಕ್ಷಿತ ಬೆಂಬಲ ಗಳಿಸಿತ್ತು.೧೦,೦೦೦ಕ್ಕಿಂತ ಹೆಚ್ಚು ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯೂ ಆಗಿತ್ತು.ಈ ಬಾರಿಯೂ ರಾಮ(ಭಟ್ಟ್) ಕಾಟವಿದ್ದು..ಬಿ.ಜೆ.ಪಿ ಈಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುತ್ತಿದೆ.
ಮಾಧ್ಯಮಗಳನ್ನು ವ್ಯವಸ್ಥಿತವಾಗಿ ಬಳಸುವ ಕಲೆ ಬಲ್ಲ ಈ ಹಿರಿಯ ನಾಯಕ ಜನಸಂಘ ಕಟ್ಟುವ ಮಾತಾಡುತ್ತ, ಮತ್ತೆ ಜನಸಂಘದ ಹೆಸರಲ್ಲಿ ಸ್ಪರ್ಧಿಸಿ ಓಟುಗಿಟ್ಟಿಸುವ,ಬಿ.ಜೆ.ಪಿಯಲ್ಲಿನ ಅತೄಪ್ತರನ್ನು ಸೆಳೆಯುವತ್ತ ಗಮನ ನೀಡಿದ್ದಾರೆ.ಮಂಗಳೂರು ಲೋಕಸಭ ಕ್ಷೇತ್ರದ ಈಎಲ್ಲಾ ತಿರುವುಗಳು ಮಾಧ್ಯಮ ಮಂದಿಯನ್ನು ಆಕರ್ಷಿಸುತ್ತಿದ್ದು ಟಿ.ವಿ 9 ವಾರ್ತ ವಾಹಿನಿ ರಾಮಭಟ್ ಜೊತೆಗಿನ ಚಕ್ರವ್ಯೂಹ ಕಾರ್ಯಕ್ರಮ ಪ್ರಸಾರ ಮಾಡಿತ್ತು .
ರಾಜಿ ಸಂಧಾನ....ಮಾತುಕತೆ ಮುಗಿದು-ಮುರಿದ ಮೇಲೆ ಈಗ ರಾಮಭಟ್ಟ್ ತನ್ನ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.
ಮುಂದೆ ಏನಾಗುತ್ತದೋ ಮತದಾರ ಪ್ರಭುವೇ ಬಲ್ಲ!
Sunday, March 29, 2009
Saturday, March 28, 2009
ಚುನಾವಣೆ-೨೦೦೯ ಸ್ಪೆಶಲ್
ಮತ್ತೊಮ್ಮೆ ಮಹಾ ಚುನಾವಣೆ ಬಂದಿದೆ.ಈ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿನ ಮತಗಟ್ಟೆಗಳ ಸಂಖ್ಯೆ ೧೫೧೮.ಅಂದ್ರೆ ಕಳೆದ ೨೦೦೮ರಲ್ಲಿನ ಚುನಾವಣೆಗಿಂತ ೧೦೬ ಮತಗಟ್ಟೆ ಈ ಬಾರಿ ಹೆಚ್ಚಾಗಿವೆ.೨೦೦ ಮತಗಟ್ಟೆಗಳನ್ನು ಅತಿ ಸೂಕ್ಷ್ಮವೆಂದು ಗುರುತಿಸಲಾಗಿದೆ.ವಿಡಿಯೊ ಕ್ಯಾಮರಾ ಅಳವಡಿಕೆ ಮಾಡಿ ಅಹಿತಕರ ಘಟನೆ ನಡೆಯದಂತೆ ಕ್ರಮ ತೆಗೆದು ಕೊಳ್ಳಲಾಗಿದ್ದು,ಇದರಿಂದ ಅಪರಾಧಿಗಳ ಬಂಧನ ಸುಲಭ ಸಾಧ್ಯವಾಗಲಿದೆ.ದೂರವಾಣಿ ಸಂಪರ್ಕ ಇಲ್ಲದ ಸುಮಾರು ೧೫೦ ಕೇಂದ್ರಗಳಲ್ಲಿ ವಿಲ್ ಫೋನ್ ಅಳವಡಿಸಲಾಗುವುದು ಎಂದು ದ.ಕನ್ನಡ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನೀಯ ಸಹಾಯಕ ಪ್ರಭಾಕರಶರ್ಮಾ ಮಾಹಿತಿ ನೀಡಿದ್ದಾರೆ..
ಇಲ್ಲಿ ಪುರುಷ ಮತದಾರರ ಸಂಖ್ಯೆಗಿಂತ ಮಹಿಳಾ ಮತದಾರರೇ ಅಧಿಕ.
ಮಹಿಳಾ ಮತದಾರರು ೬೭೫೦೦೨ ಇದ್ದರೆ,ಪುರುಷ ಮತದಾರರು ೬೫೮೧೭೪ ಇದ್ದಾರೆ.
ಇದು ಈ ಬಾರಿಯ ಚುನಾವಣೆಯ ಸ್ಟ್ಯಾಟಿಸ್ಟಿಕ್ಸ್..
ವಿಟ್ಲ ಸುತ್ತ ಮುತ್ತಲಿನ ಪ್ರದೇಶ ಮಂಗಳೂರು ಲೋಕ ಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ.
ಅಂದ ಹಾಗೆ ಇಂದು ವಿಟ್ಲ ಅರಮನೆ ರಸ್ತೆಯ ಕೆ.ಜೆ.ವಾಣಿಜ್ಯ ಸಂಕೀರ್ಣದಲ್ಲಿ ಬಿ.ಜೆ.ಪಿ ಚುನಾವಣಾ ಕಛೇರಿ ಉದ್ಘಾಟನೆಯಾಯಿತು..ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು,ಸ್ಥಳೀಯ ನಾಯಕರು ಭಾಗವಹಿಸಿದ್ದರು...ನಳಿನ್ ಕುಮಾರ್ ಕಟೀಲ್ ಬಹುತೇಕ ಖಚಿತ ಅಭ್ಯರ್ಥಿ.
ಅದೇ ಸಮಯ ಕಾಂಗ್ರೆಸ್ ತನ್ನ ಅಭ್ಯರ್ಥಿ ಸಾಲಮೇಳದ ಜನಾರ್ಧನ ಪೂಜಾರಿಯವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿ ಚುನಾವಣಾ ಕದನಕ್ಕೆ ತೊಡೆ ತಟ್ಟಿ ನಿಂತಿದೆ.ಜನತಾದಳ ಸಿಪಿಎಂ ನ ಮಾಧವರಿಗೆ ಬೆಂಬಲ ನೀಡುತ್ತಿದೆ.
ಚುನಾವಣೆ ತನಕ ಮನೆಮುಂದೆ ಬಂದು ಹಲ್ಲುಗಿಂಜೋರು ಚುನಾವಣೆ ಬಳಿಕ ಸಿಗೋದೇ ಕಷ್ಟ!ನೀರು ಇಲ್ಲ,ಕರೆಂಟಿಲ್ಲಾ ಅಂತ ನಿಮ್ಮ ಸಮಸ್ಯೆ ಬಿಚ್ಚಿದ್ರೆ ವೀರಭದ್ರಾವತಾರ ತಾಳುತ್ತಿದ್ದ ಮುಖಂಡರೆಲ್ಲಾ ಶಾಂತ ಚಿತ್ತರಾಗಿ,ಪ್ರಸನ್ನವದನರಾಗಿ ಮನೆ-ಮನೆಗೆಬರುತ್ತಿದ್ದಾರೆ.
ಬಡಪಾಯಿ ಮತದಾರ ಮಾತ್ರ..ಈ ಬಾರಿಯೂ ಕಕ್ಕಾಬಿಕ್ಕೀ...!
ವಿಟ್ಲಕ್ಕೊಂದು ಸರಕಾರೀ ಹೈಸ್ಕೂಲು,ಸರಕಾರಿ ಪದವಿ ಪೂರ್ವ ಕಾಲೇಜು,ವಾಕಿಂಗ್ ಟ್ರ್ಯಾಕ್ಇರೋ ಒಂದು ಉದ್ಯಾನವನ,ಸುಸಜ್ಜಿತ ಈಜು ಕೊಳ ,ಪ್ರತಿ ಮನೆಗೂ ನೀರು ಸರಬರಾಜು ಇಂತಹ ಜನಪರ ಕೆಲಸಗಳನ್ನು ತನ್ನ ಮುಂದಿನ 5ವರ್ಷ ಅವಧಿಯಲ್ಲಿ ಮಾಡಬಲ್ಲಾ "ಹೄದಯವಂತ" ನಿಗಾಗಿರಲಿ ಮತದಾರರ ಮತ.
ಅದೆಲ್ಲಾ ಇರ್ಲಿ.....ಕೊನೆಗೆ ನಿಮ್ಮ ತಲೆ ಮ್ಯಾಲೆ ಕಷ್ಟ ಬಂದ್ರೆ ನಿಮ್ಮ ಕೈನೇ...!ಮತ್ಯಾರದ್ದೂ ಅಲ್ಲಾ....ಅಂತ ಹೇಳ್ತಾ ಈ ಬಾರಿ ಚುನಾವಣೆಯ ಅಧಿಕೄತ(ಹಾಗಿದ್ರೆ..ಅನಧಿಕೄತ ಇದ್ಯಾ ಅಂತ ಕೇಳಬಾರ್ದು!)..ವೆಚ್ಚ.. ೧೦,೦೦೦ ಕೋಟಿಯಂತೆ... ಬರೋಬ್ಬರಿ
ಇದರಲ್ಲಿ ಚುನಾವಣಾಆಯೋಗ-೧೩೦೦ಕೋಟಿ
ಕೇಂದ್ರ-ರಾಜ್ಯಸರಕಾರ-೭೦೦ಕೋಟಿ
ಬಿ.ಜೆ.ಪಿ.ಪಕ್ಷ-೧೦೦೦ಕೋಟಿ
ಕಾಂಗ್ರೆಸ್ ಪಾರ್ಟಿ-೧೦೦೦ಕೋಟಿ
ಸ್ಥಳೀಯ ಪಕ್ಷಗಳು-೧೦೦೦ಕೋಟಿ
ಅಭ್ಯರ್ಥಿಗಳು-೫೦೦೦ಕೋಟಿ ಅಂದ್ರೆ ಒಟ್ಟು-೧೦೦೦೦ಕೋಟಿ ರೂಪಾಯಿಯಂತೆ.....ನಿಯಮ ಪ್ರಕಾರ ಒಬ್ಬ ಅಭ್ಯರ್ಥಿ ೨೫ ಲಕ್ಷಕ್ಕಿಂತ ಹೆಚ್ಚು ಬಳಸುವಂತಿಲ್ಲ.
ಹ್ಯಾಗಿದೆ ಚುನಾವಣಾ ವೆಚ್ಚಾ?
ಝಣ...ಝಣ...ಕಾಂಚಣದಲ್ಲಿ...
ಇಲ್ಲಿ ಪುರುಷ ಮತದಾರರ ಸಂಖ್ಯೆಗಿಂತ ಮಹಿಳಾ ಮತದಾರರೇ ಅಧಿಕ.
ಮಹಿಳಾ ಮತದಾರರು ೬೭೫೦೦೨ ಇದ್ದರೆ,ಪುರುಷ ಮತದಾರರು ೬೫೮೧೭೪ ಇದ್ದಾರೆ.
ಇದು ಈ ಬಾರಿಯ ಚುನಾವಣೆಯ ಸ್ಟ್ಯಾಟಿಸ್ಟಿಕ್ಸ್..
ವಿಟ್ಲ ಸುತ್ತ ಮುತ್ತಲಿನ ಪ್ರದೇಶ ಮಂಗಳೂರು ಲೋಕ ಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ.
ಅಂದ ಹಾಗೆ ಇಂದು ವಿಟ್ಲ ಅರಮನೆ ರಸ್ತೆಯ ಕೆ.ಜೆ.ವಾಣಿಜ್ಯ ಸಂಕೀರ್ಣದಲ್ಲಿ ಬಿ.ಜೆ.ಪಿ ಚುನಾವಣಾ ಕಛೇರಿ ಉದ್ಘಾಟನೆಯಾಯಿತು..ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು,ಸ್ಥಳೀಯ ನಾಯಕರು ಭಾಗವಹಿಸಿದ್ದರು...ನಳಿನ್ ಕುಮಾರ್ ಕಟೀಲ್ ಬಹುತೇಕ ಖಚಿತ ಅಭ್ಯರ್ಥಿ.
ಅದೇ ಸಮಯ ಕಾಂಗ್ರೆಸ್ ತನ್ನ ಅಭ್ಯರ್ಥಿ ಸಾಲಮೇಳದ ಜನಾರ್ಧನ ಪೂಜಾರಿಯವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿ ಚುನಾವಣಾ ಕದನಕ್ಕೆ ತೊಡೆ ತಟ್ಟಿ ನಿಂತಿದೆ.ಜನತಾದಳ ಸಿಪಿಎಂ ನ ಮಾಧವರಿಗೆ ಬೆಂಬಲ ನೀಡುತ್ತಿದೆ.
ಚುನಾವಣೆ ತನಕ ಮನೆಮುಂದೆ ಬಂದು ಹಲ್ಲುಗಿಂಜೋರು ಚುನಾವಣೆ ಬಳಿಕ ಸಿಗೋದೇ ಕಷ್ಟ!ನೀರು ಇಲ್ಲ,ಕರೆಂಟಿಲ್ಲಾ ಅಂತ ನಿಮ್ಮ ಸಮಸ್ಯೆ ಬಿಚ್ಚಿದ್ರೆ ವೀರಭದ್ರಾವತಾರ ತಾಳುತ್ತಿದ್ದ ಮುಖಂಡರೆಲ್ಲಾ ಶಾಂತ ಚಿತ್ತರಾಗಿ,ಪ್ರಸನ್ನವದನರಾಗಿ ಮನೆ-ಮನೆಗೆಬರುತ್ತಿದ್ದಾರೆ.
ಬಡಪಾಯಿ ಮತದಾರ ಮಾತ್ರ..ಈ ಬಾರಿಯೂ ಕಕ್ಕಾಬಿಕ್ಕೀ...!
ವಿಟ್ಲಕ್ಕೊಂದು ಸರಕಾರೀ ಹೈಸ್ಕೂಲು,ಸರಕಾರಿ ಪದವಿ ಪೂರ್ವ ಕಾಲೇಜು,ವಾಕಿಂಗ್ ಟ್ರ್ಯಾಕ್ಇರೋ ಒಂದು ಉದ್ಯಾನವನ,ಸುಸಜ್ಜಿತ ಈಜು ಕೊಳ ,ಪ್ರತಿ ಮನೆಗೂ ನೀರು ಸರಬರಾಜು ಇಂತಹ ಜನಪರ ಕೆಲಸಗಳನ್ನು ತನ್ನ ಮುಂದಿನ 5ವರ್ಷ ಅವಧಿಯಲ್ಲಿ ಮಾಡಬಲ್ಲಾ "ಹೄದಯವಂತ" ನಿಗಾಗಿರಲಿ ಮತದಾರರ ಮತ.
ಅದೆಲ್ಲಾ ಇರ್ಲಿ.....ಕೊನೆಗೆ ನಿಮ್ಮ ತಲೆ ಮ್ಯಾಲೆ ಕಷ್ಟ ಬಂದ್ರೆ ನಿಮ್ಮ ಕೈನೇ...!ಮತ್ಯಾರದ್ದೂ ಅಲ್ಲಾ....ಅಂತ ಹೇಳ್ತಾ ಈ ಬಾರಿ ಚುನಾವಣೆಯ ಅಧಿಕೄತ(ಹಾಗಿದ್ರೆ..ಅನಧಿಕೄತ ಇದ್ಯಾ ಅಂತ ಕೇಳಬಾರ್ದು!)..ವೆಚ್ಚ.. ೧೦,೦೦೦ ಕೋಟಿಯಂತೆ... ಬರೋಬ್ಬರಿ
ಇದರಲ್ಲಿ ಚುನಾವಣಾಆಯೋಗ-೧೩೦೦ಕೋಟಿ
ಕೇಂದ್ರ-ರಾಜ್ಯಸರಕಾರ-೭೦೦ಕೋಟಿ
ಬಿ.ಜೆ.ಪಿ.ಪಕ್ಷ-೧೦೦೦ಕೋಟಿ
ಕಾಂಗ್ರೆಸ್ ಪಾರ್ಟಿ-೧೦೦೦ಕೋಟಿ
ಸ್ಥಳೀಯ ಪಕ್ಷಗಳು-೧೦೦೦ಕೋಟಿ
ಅಭ್ಯರ್ಥಿಗಳು-೫೦೦೦ಕೋಟಿ ಅಂದ್ರೆ ಒಟ್ಟು-೧೦೦೦೦ಕೋಟಿ ರೂಪಾಯಿಯಂತೆ.....ನಿಯಮ ಪ್ರಕಾರ ಒಬ್ಬ ಅಭ್ಯರ್ಥಿ ೨೫ ಲಕ್ಷಕ್ಕಿಂತ ಹೆಚ್ಚು ಬಳಸುವಂತಿಲ್ಲ.
ಹ್ಯಾಗಿದೆ ಚುನಾವಣಾ ವೆಚ್ಚಾ?
ಝಣ...ಝಣ...ಕಾಂಚಣದಲ್ಲಿ...
Thursday, March 26, 2009
ಯುಗಾದಿಯ ಶುಭ ಕಾಮನೆಗಳು

ಚಾಂದ್ರಮಾನ ಯುಗಾದಿಯ ಆಚರಣೆಯ ಶುಭ ಸಂದರ್ಭ......
ವಿರೋಧಿ ಸಂವತ್ಸರ ಆರಂಭವಾಗುವ ಹೊತ್ತು......
ಬಾಳ ಪಯಣದಲ್ಲಿ...ಹೊಸತನ್ನು ತರುವ,ಹರುಷದ ಬೆಳೆಯನ್ನು ತೆಗೆಯುವ ದಿನಗಳು ನಿಮ್ಮದಾಗಲಿ....
ಕಳೆದ ದಿನಗಳ ಕಹಿ ನೆನಪುಗಳ ಕಳಚಿ........
ಭರವಸೆಯ ಕ್ಷಣಗಳನ್ನು ನಿರ್ಮಿಸುವ ಜೀವನೋತ್ಸಾಹವನ್ನು ಈ ಯುಗಾದಿ ನಿಮ್ಮೆಲ್ಲರಲ್ಲಿ ತುಂಬಲಿ...ಅಂತಹ ಕ್ಷಣಗಳನ್ನು ಎದುರು ನೋಡೋಣ.
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು
ಲೋಕಾ ಸಮಸ್ತಾ ಸುಖಿನೋ ಭವಂತು
ಪಂಚಲಿಂಗೇಶ್ವರ ದೇವಳ ಜೀರ್ಣೋದ್ಧಾರ ಕಾರ್ಯ ಪ್ರಗತಿ

ವಿಟ್ಲ ಪಂಚಲಿಂಗೇಶ್ವರ ದೇವಳದ ಜೀರ್ಣೋದ್ಧಾರದ ಕೆಲಸ ಭರದಿಂದ ಸಾಗುತ್ತಿದ್ದಂತೆ ದೊಡ್ಡ ಪ್ರಮಾಣದಲ್ಲಿ ಭಕ್ತ ಸಂದೋಹ ಸಹಕಾರ ನೀಡಲಾರ0ಭಿಸಿದೆ..
ಮರದ ಕೆಲಸವೂ ಭರದಿಂದ ಸಾಗುತ್ತಿದೆ.
ಇವೆಲ್ಲದರ ಜೊತೆಯಲ್ಲಿ ಸುಮಾರು ೬೫ಫೀಟ್ ಎತ್ತರದ ಗರ್ಭಗುಡಿಯ ಗೋಡೆ ಕೆಲಸವು ಪ್ರಗತಿಯಲ್ಲಿದೆ.ಸರಕಾರದ ವಿಶೇಷ ಅನುದಾನದಿಂದ ದೇವಸ್ಥಾನದ ಉತ್ತರ ಭಾಗದಲ್ಲಿನ ಕೆರೆಗೆ ಕಾಯಕಲ್ಪ ನೀಡುವ ಕಾರ್ಯವೂ ನಡೆಯುತ್ತಿದೆ...
ಇವೆಲ್ಲಾ ಕೆಲಸ ಕಾರ್ಯಗಳ ವೀಕ್ಷಣೆಗೇ ನಾಡಿನಾ ಗಣ್ಯಾತಿಗಣ್ಯರು...ಸಾಧು ಸಂತರು ಆಗಮಿಸುತ್ತಿದ್ದಾರೆ.
ಇವತ್ತು ಸಾಯಂಕಾಲ ಧರ್ಮಸ್ಥಳದ ಶ್ರೀ ಹರ್ಷೇಂದ್ರ ಹೆಗ್ಗಡೆಯವರು ಸಪತ್ನೀಕರಾಗಿ ಆಗಮಿಸಿದ್ದರು.ದೇವಳಕ್ಕಲ್ಲದೆ...ಕೇಪೂ ಉಳ್ಳಾಲ್ತಿ,ಅನಂತೇಶ್ವರ ದೇವಳ ವಿಟ್ಲಕ್ಕೂ ,ಚಂದ್ರನಾಥಬಸದಿಗೂ ಭೇಟಿಯಿತ್ತರು.
ಫೋಟೊ:ಕೆರೆಯ ಕಾಮಗಾರಿ ಪ್ರಗತಿ
******************************
Monday, March 23, 2009
ಮಳೆ ನಿಂತೂ ಹೋದ ಮೇಲೆ...

ಮತ್ತೆ ಮತ್ತೆ...
ನೆನಪಾಗೋದೂ...ಅದೇ ಹಾಡು.......
ಮಳೇ ನಿಂತೂ ಹೋದ ಮೇಲೇ ...
ಏನು ಸಿನಿಮಾ ಹಾಡು ಹಾಡ್ತಿದ್ದೇನೆ ಅಂದ್ಕೋಡ್ರಾ?
ಇಲ್ಲಾರೀ......
ನಿನ್ನೆ ಸಂಜೆ ಅನಿರೀಕ್ಷಿತವಾಗಿ ಧಾರಾಕಾರವಾಗಿ ಸುರಿದ ಮಳೆನಿಂತಾಗ....ನೆನೆದ ವಿಟ್ಲದ ಮಾರ್ಗಗಳ ದುರವಸ್ಥೆ ಕಂಡಾಗ,
ಅತ್ಯಾಧುನಿಕವಾಗಿ ನಿರ್ಮಿಸಿದ ಚರಂಡಿಯಲ್ಲಿ ನೀರು ಇಳಿಯದೇ..ಮಾರ್ಗವೆಲ್ಲಾ ಜಲಾವೄತಗೊಂಡಾಗಾ....
ನೆನಪಾದದ್ದು...ಈ ಹಾಡು...!
ಇಲ್ಲಿ ಮಳೆ ಬಂದು
ಹೋದ ಮೇಲೆ ಜನ ಮುಖ್ಯರಸ್ತೆಯಲ್ಲಿ..ಮಕ್ಕಳು-ವೄದ್ಧರಿಗೆ
ನಡ್ಯೋದು ಬಹಳ ಕಷ್ಟಾ....ಮಾರಾಯ್ರೇ...ಇಲ್ಲಿ
ಜಾರಿ ಬೀಳದೆ ಮನೆ ಸೇರಿದವನೆ ಜಾಣ!
ಸ್ವಚ್ಛ
ಗ್ರಾಮಯೋಜನೆಯಡೀ ರಚಿಸಿದ ಚರಂಡೀಗಳೆಲ್ಲಾ ನಿಷ್ಪ್ರಯೋಜಕ
ಅನ್ನಿಸೋವಂತ ಸ್ಥಿತಿಲೀ ಮತ್ತೆ ಮತ್ತೆ...
ನೆನಪಾಗೋದೂ...ಅದೇ ಹಾಡು.......
ಮಳೇ ನಿಂತೂ ಹೋದ ಮೇಲೇ ...
ಫೋಟೊ:ವಿಟ್ಲದಲ್ಲಿ ಹಳ್ಳಗಳಿಂದ ತುಂಬಿದ ರಸ್ತೆ
Sunday, March 22, 2009
ದೇವರಿಗೂ ಕಳ್ಳರ ಕಾಟ!
ಎಲ್ಲರ ಕಾಯುವ ದೇವರಿಗೂ ಇದೀಗ ಕಳ್ಳರ ಕಾಟ!ಕಳ್ಳರ ಹುಡುಕಾಟದಲ್ಲಿ ವಿಟ್ಲ ಪೋಲಿಸ್.
ಇಲ್ಲೇ ಸಮೀಪದ ಕೆಲಿಂಜ ಉಳ್ಳಾಲ್ತಿ ದೈವಸ್ಥಾನದಲ್ಲೀ ಶುಕ್ರವಾರ ೨೦ಮಾರ್ಚ್೨೦೦೯ ರ ರಾತ್ರಿ ಕಳ್ಳರು ನುಗ್ಗಿ ಕಳ್ಳತನಕ್ಕೆ ಪ್ರಯತ್ನ ನಡೆಸಿದ್ದಾರೆ.ದೈವಸ್ಥಾನಕ್ಕೆ ಹೊಕ್ಕು ನಗ-ಆಭರಣಗಳಿಗೆ ಹುಡುಕಿ ಏನೂ ಸಿಗದೆ ಪ್ರಾಕಾರದ ಇತರ ಪರಿವಾರ ಗುಡಿಗಳಲ್ಲು ಆಭರಣಗಳಿಗಾಗಿ ಹುಡುಕಾಡಿದ ಕುರುಹು ಕಂಡು ಬಂದಿದೆ.
ಶನಿವಾರ ಬೆಳಿಗ್ಗೆ ಈ ವಿಚಾರ ಬೆಳಕಿಗೆ ಬಂದಿದೆ. ಶ್ವಾನದಳ,ಬೆರಳಚ್ಚು ತಜ್ನರ ಸಹಾಯ ಪಡೆದ ವಿಟ್ಲ ಪೋಲಿಸರು ತನಿಖೆ ಮುಂದುವರಿಸಿದ್ದಾರೆ.ಕಳೆದ 3 ತಿಂಗಳ ಹಿಂದೆಯಷ್ಟೇ ಬ್ರಹ್ಮಕಲಶೋತ್ಸವ ವಿಜೄಂಭಣೆಯಿಂದ ಜರುಗಿ ಒಂದು ವಾರದಲ್ಲೇ ದೈವಸ್ಥಾನದ ಕಚೇರಿಗೆ ಕಳ್ಳರು ನುಗ್ಗಿದ್ದರು..ಇದು ಎರಡನೇ ಬಾರಿ ಕಳ್ಳತನ ಪ್ರಯತ್ನವಾಗಿದೆ.
ಇದೇ ಸಮಯ ಮಾಮೇಶ್ವರ ಸನಿಹದ ಮಾಡ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿನ ಹಣವನ್ನು ಕಳ್ಳರು ಲಪಟಾಯಿಸಿದ್ದಾರೆ.
ಇಲ್ಲೇ ಸಮೀಪದ ಕೆಲಿಂಜ ಉಳ್ಳಾಲ್ತಿ ದೈವಸ್ಥಾನದಲ್ಲೀ ಶುಕ್ರವಾರ ೨೦ಮಾರ್ಚ್೨೦೦೯ ರ ರಾತ್ರಿ ಕಳ್ಳರು ನುಗ್ಗಿ ಕಳ್ಳತನಕ್ಕೆ ಪ್ರಯತ್ನ ನಡೆಸಿದ್ದಾರೆ.ದೈವಸ್ಥಾನಕ್ಕೆ ಹೊಕ್ಕು ನಗ-ಆಭರಣಗಳಿಗೆ ಹುಡುಕಿ ಏನೂ ಸಿಗದೆ ಪ್ರಾಕಾರದ ಇತರ ಪರಿವಾರ ಗುಡಿಗಳಲ್ಲು ಆಭರಣಗಳಿಗಾಗಿ ಹುಡುಕಾಡಿದ ಕುರುಹು ಕಂಡು ಬಂದಿದೆ.
ಶನಿವಾರ ಬೆಳಿಗ್ಗೆ ಈ ವಿಚಾರ ಬೆಳಕಿಗೆ ಬಂದಿದೆ. ಶ್ವಾನದಳ,ಬೆರಳಚ್ಚು ತಜ್ನರ ಸಹಾಯ ಪಡೆದ ವಿಟ್ಲ ಪೋಲಿಸರು ತನಿಖೆ ಮುಂದುವರಿಸಿದ್ದಾರೆ.ಕಳೆದ 3 ತಿಂಗಳ ಹಿಂದೆಯಷ್ಟೇ ಬ್ರಹ್ಮಕಲಶೋತ್ಸವ ವಿಜೄಂಭಣೆಯಿಂದ ಜರುಗಿ ಒಂದು ವಾರದಲ್ಲೇ ದೈವಸ್ಥಾನದ ಕಚೇರಿಗೆ ಕಳ್ಳರು ನುಗ್ಗಿದ್ದರು..ಇದು ಎರಡನೇ ಬಾರಿ ಕಳ್ಳತನ ಪ್ರಯತ್ನವಾಗಿದೆ.
ಇದೇ ಸಮಯ ಮಾಮೇಶ್ವರ ಸನಿಹದ ಮಾಡ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿನ ಹಣವನ್ನು ಕಳ್ಳರು ಲಪಟಾಯಿಸಿದ್ದಾರೆ.
Friday, March 20, 2009
ಕಾಲನು ಬಂದು ...................

.
ಕಳೆದೊಂದು ವಾರದಿಂದ ನಿಜಕ್ಕು ನನ್ನ ಮನಸ್ಸು ಸರಿಯಿಲ್ಲ....ಒಮ್ಮೊಮ್ಮೆ ಮನಸ್ಸು ಎಷ್ಟೂ ಗಟ್ಟೀ ಮಾಡಿ ಕೊಂಡರೂ ಮೇಲೆಂದ ಮೇಲೇ ಘಟಿಸಿ ಹೋಗೋ ಕೆಟ್ಟ ಘಟನೆಗಳು ನಮ್ಮನ್ನು ಅಧೀರನ್ನಾಗಿಸೋದು...ನಮ್ಮ ತ್ರಾಣವನ್ನೆಲ್ಲಾ ಹಿಂಡಿ ಹಾಕೊದು ಇದ್ದಿದ್ದೆ.
ಅದು ಈ ಬಾರಿ ಅತಿ ಆತ್ಮೀಯರು ಅಂತನ್ನೀಸೀ ಕೊಂಡೋರು ಕಣ್ಮರೆಯಾದಾಗ ಮನಸ್ಸಿಗೆ ಕಸಿವಿಸಿ..
ಕಳೆದ ಆಗೋಸ್ತು ತಿಂಗಳಲ್ಲಿ ದೊಡ್ಡಮ್ಮ,ಈ ಬಾರಿ ಪಕ್ಕದ್ಮನೆ ಸುಶೀಲಅಕ್ಕ,ಮತ್ತೆ ನನ್ನ ಬಾಲ್ಯ ಗೆಳೆಯ- ನಮ್ಮೊಂದಿಗೆ ಆಡಿ..ನಮ್ಮೋಂದಿಗಿದ್ದ ಗಣೇಶ ವಿಧಿವಶನಾಗಿದ್ದು ನಂಬೋಕಾಗ್ತಾ ...ಇಲ್ಲಾ....ಹೋದಲ್ಲಿ ಬಂದಲ್ಲಿ ಎಲ್ಲಾ ಫಂಕ್ಷನಗಳಲ್ಲೂ ಅವನದ್ದೇ ಸುದ್ದಿ ಎಲ್ರಾ ಬಾಯಲ್ಲೂ...
ಏನು ಮಾಡೋದು ..ನೆನಪಾಗೋದೊ..
.ಕಾಲನು ಬಂದು ಬಾ ಎಂದಾಗ.......
ನಾವು ನಿಸ್ಸಹಾಯಕ್ರಲ್ವಾ?
PHOTO:ಪೆರಿಯ ಶಾಂತಿ ಅಪಘಾತ
ನೂಜಿ- ಧರ್ಮನೇಮ
ನೂಜಿ ಗುರಿಕಾರ ವೆಂಕಟೇಶ್ವರ ಭಟ್ರ ಮನೆಯಲ್ಲಿ ಧರ್ಮನೇಮ ಮಾರ್ಚ್ ೨೦ರ ರಾತ್ರಿ.
ರಾಘವೇಶ್ವರ ಸ್ವಾಮಿಗಳ ದಿವ್ಯ ಉಪಸ್ಥಿತಿ -ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.
ತುಳುನಾಡಿನ ಜಾನಪದೀಯ ಆಚರಣೆಯಾದ ಭೂತಾರಾಧನೆಯ ಮೂಲಕ ವಿಟ್ಲ ಸೀಮೆಯ ದೈವ ಮಲರಾಯಿ ಮತ್ತು ಪಿಲಿ ಚಾಮುಂಡಿ ದೈವಗಳಿಗೆ ಧರ್ಮನೇಮ ಜರುಗಿತು.ವಿಟ್ಲ ಸೀಮೆಯ ಅರಸರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಘವೇಶ್ವರ ಸ್ವಾಮಿಗಳ ದಿವ್ಯ ಉಪಸ್ಥಿತಿ -ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.
ತುಳುನಾಡಿನ ಜಾನಪದೀಯ ಆಚರಣೆಯಾದ ಭೂತಾರಾಧನೆಯ ಮೂಲಕ ವಿಟ್ಲ ಸೀಮೆಯ ದೈವ ಮಲರಾಯಿ ಮತ್ತು ಪಿಲಿ ಚಾಮುಂಡಿ ದೈವಗಳಿಗೆ ಧರ್ಮನೇಮ ಜರುಗಿತು.ವಿಟ್ಲ ಸೀಮೆಯ ಅರಸರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಏನು ಮಾಯೆಯೋ?
ವಿಭೂತಿ ಬಾಬಗಳಿಂದ,ಭವಿಷ್ಯ ಹೇಳೋವರಿಂದ,ಅದ್ಯಾರೋ ಭಿಕ್ಷುಕರಿಂದ ಜನ ಮೋಸಹೋಗೋ ಪ್ರಕರಣಗಳೆಷ್ಟೋ ವರದಿಯಾಗುತ್ತಿದ್ದರು ವಂಚಕರಿಂದ ಮೋಸ ಹೋಗೋ ಜನಕ್ಕೇನೂ ಕಮ್ಮಿ ಇಲ್ಲ.ವಿಟ್ಲದಲ್ಲೂ ಈ ರೀತಿ ನಡೆಯೋದಿದೆ.
ಮೊನ್ನೆ ಆದಿತ್ಯವಾರ ಬೆಳಿಗ್ಗೆ ಮಿತ್ರರೊಬ್ಬರ ಮೊಬೈಲ್ ಕರೆ!ವೄದ್ಧೆ ಒಬ್ಬರು ಮೋಸಕ್ಕೊಳಗಾಗಿದ್ದಾರೆ,ಆಕೆಯ ಚಿನ್ನದ ಸರ ಅಪಹರಿಸಲಾಗಿದೆ ಎಂಬ ಸಿಕ್ಕ ಮಾಹಿತಿಯನ್ನು ಪೋಲಿಸರಿಗೆ ತಿಳಿಸಿದೆ.ಆ ಬಳಿಕವೇ ....ಆ ಮುಗ್ಧ ಅಜ್ಜಿ ಅಪರಚಿತನೋರ್ವನಿಂದ ಮೋಸ ಹೋದ ರೀತಿ ಗೊತ್ತಾಗಿದ್ದು....!
ದಿನ ಬೆಳಗಾದರೆ ಗಿಜಿಗುಟ್ಟುವ ವಿಟ್ಲ ಬಸ್ ಸ್ಟ್ಯಾಂಡ್ನಲ್ಲಿ ಬಸ್ ಗೆ ಕಾಯುತ್ತಿದ್ದ ವೄದ್ಧೆಯಲ್ಲಿ ಮಾತಾಡಿ, ಬಳಿಯ "ಉಪಾಹಾರ"ವೆಂಬ ಹೋಟೆಲಿಗೆ ಕರೆದುಕೊಂಡು ಹೋಗಿ ,ನಂತರ ಆಕೆಯ ಕೊರಳಲ್ಲಿನ ಚಿನ್ನದ ಸರವನ್ನು ಪ್ಯಾಟರ್ನ್ ತೋರಿಸಿ ತರುತ್ತೇನೆ...ನನಗೆ ಹೊಸ ಸರ ಮಾಡಿಸಲಿಕ್ಕಿದೆ...ಎಂದು ಹೇಳಿ ೨ ನಕಲಿ ಬಳೆಗಳನ್ನು ಚಿನ್ನದ್ದೆಂದು ಹೇಳಿ ನಂಬಿಸಿ ಕೈಗೆ ತುರುಕಿ ಹೋದ ಅಸಾಮಿಯನ್ನು ಹೆಂಗಸು ಕಾದದ್ದೇ ಬಂತು!
ಹೋಟೆಲಿನಲ್ಲಿ ಸುಮಾರು ಹೊತ್ತು ಕಳೆದ ಮೇಲೆ ಅಜ್ಜಿಯೇ ಈ ಸಂಗತಿಯನ್ನು ಬಾಯ್ಬಿಟ್ಟಾಗ ಅಲ್ಲಿದ್ದವರೆಲ್ಲ ಸೇರಿ ಸರ ಎಗರಿಸದವನ ಹುಡುಕೊ ಪ್ರಯತ್ನ ಮಾಡಿದರೂ ಫಲ ಶೂನ್ಯ.
ಮಿಕವನ್ನೆತ್ತಿದ ಗಿಡುಗ ಹಾರಿ ಹೋಗಿತ್ತು..
ಈ ವಿಷ್ಯ ಎಲ್ಲಾ ನ್ಯೂಸ್ ಪೇಪರ್ ಗಳಲ್ಲಿ ಬಂದಿತ್ತು...ಆದರೂ ಮತ್ತೆ ಒಂದು ವಾರದ ಬಳಿಕ ಬಿ.ಸಿ. ರೋಡ್ ನಲ್ಲಿ ಇಂತದೇ ಒಂದು ಸರ ಅಪಹರಣ ಪ್ರಕರಣ ವರದಿಯಾಗಿತ್ತು!
ಮತ್ತಿನ್ಯಾವಾಗ ಜನ ಬುದ್ಧಿ ಕಲಿಯೋದಾ...?
ಮೊನ್ನೆ ಆದಿತ್ಯವಾರ ಬೆಳಿಗ್ಗೆ ಮಿತ್ರರೊಬ್ಬರ ಮೊಬೈಲ್ ಕರೆ!ವೄದ್ಧೆ ಒಬ್ಬರು ಮೋಸಕ್ಕೊಳಗಾಗಿದ್ದಾರೆ,ಆಕೆಯ ಚಿನ್ನದ ಸರ ಅಪಹರಿಸಲಾಗಿದೆ ಎಂಬ ಸಿಕ್ಕ ಮಾಹಿತಿಯನ್ನು ಪೋಲಿಸರಿಗೆ ತಿಳಿಸಿದೆ.ಆ ಬಳಿಕವೇ ....ಆ ಮುಗ್ಧ ಅಜ್ಜಿ ಅಪರಚಿತನೋರ್ವನಿಂದ ಮೋಸ ಹೋದ ರೀತಿ ಗೊತ್ತಾಗಿದ್ದು....!
ದಿನ ಬೆಳಗಾದರೆ ಗಿಜಿಗುಟ್ಟುವ ವಿಟ್ಲ ಬಸ್ ಸ್ಟ್ಯಾಂಡ್ನಲ್ಲಿ ಬಸ್ ಗೆ ಕಾಯುತ್ತಿದ್ದ ವೄದ್ಧೆಯಲ್ಲಿ ಮಾತಾಡಿ, ಬಳಿಯ "ಉಪಾಹಾರ"ವೆಂಬ ಹೋಟೆಲಿಗೆ ಕರೆದುಕೊಂಡು ಹೋಗಿ ,ನಂತರ ಆಕೆಯ ಕೊರಳಲ್ಲಿನ ಚಿನ್ನದ ಸರವನ್ನು ಪ್ಯಾಟರ್ನ್ ತೋರಿಸಿ ತರುತ್ತೇನೆ...ನನಗೆ ಹೊಸ ಸರ ಮಾಡಿಸಲಿಕ್ಕಿದೆ...ಎಂದು ಹೇಳಿ ೨ ನಕಲಿ ಬಳೆಗಳನ್ನು ಚಿನ್ನದ್ದೆಂದು ಹೇಳಿ ನಂಬಿಸಿ ಕೈಗೆ ತುರುಕಿ ಹೋದ ಅಸಾಮಿಯನ್ನು ಹೆಂಗಸು ಕಾದದ್ದೇ ಬಂತು!
ಹೋಟೆಲಿನಲ್ಲಿ ಸುಮಾರು ಹೊತ್ತು ಕಳೆದ ಮೇಲೆ ಅಜ್ಜಿಯೇ ಈ ಸಂಗತಿಯನ್ನು ಬಾಯ್ಬಿಟ್ಟಾಗ ಅಲ್ಲಿದ್ದವರೆಲ್ಲ ಸೇರಿ ಸರ ಎಗರಿಸದವನ ಹುಡುಕೊ ಪ್ರಯತ್ನ ಮಾಡಿದರೂ ಫಲ ಶೂನ್ಯ.
ಮಿಕವನ್ನೆತ್ತಿದ ಗಿಡುಗ ಹಾರಿ ಹೋಗಿತ್ತು..
ಈ ವಿಷ್ಯ ಎಲ್ಲಾ ನ್ಯೂಸ್ ಪೇಪರ್ ಗಳಲ್ಲಿ ಬಂದಿತ್ತು...ಆದರೂ ಮತ್ತೆ ಒಂದು ವಾರದ ಬಳಿಕ ಬಿ.ಸಿ. ರೋಡ್ ನಲ್ಲಿ ಇಂತದೇ ಒಂದು ಸರ ಅಪಹರಣ ಪ್ರಕರಣ ವರದಿಯಾಗಿತ್ತು!
ಮತ್ತಿನ್ಯಾವಾಗ ಜನ ಬುದ್ಧಿ ಕಲಿಯೋದಾ...?
Subscribe to:
Comments (Atom)
