Showing posts with label VITLA. Show all posts
Showing posts with label VITLA. Show all posts

Saturday, December 11, 2010

ಷಷ್ಠಿ

ಸುಬ್ರಹ್ಮಣ್ಯ ಷಷ್ಠಿ ಆಚರಣೆ ವಿಟ್ಲದಲ್ಲಿ ವಿಜೄಂಭಣೆಯಿಂದ ನಡೆಯುತ್ತದೆ.ಅನಂತೇಶ್ವರ ದೇಗುಲದಲ್ಲಿ ವಾರ್ಷಿಕ ಆಚರಣೆಗಳೊಂದಿಗೆ ನಡೆಯುವ ಷಷ್ಠಿಗೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ.ಚಿತ್ರಾಪುರ ಸಾರಸ್ವತರು ಆರಾಧಿಸುವ ಈ ದೇವಸ್ಥಾನ ಶಿರಾಲಿ ಚಿತ್ರಾಪುರ ಮಠದ ಆಳ್ವಿಕೆಯಲ್ಲಿದೆ. ಪಂಚಮಿ ದಿನ ದೇವರ ಮೄಗಬೇಟೆ ಉತ್ಸವ ಜೋರಾಗಿ ನಡೆಯುತ್ತದೆ. ವಿಟ್ಲ ಸನಿಹದ ಕೇಪು ಸುಬ್ರಾಯದೇಗುಲ,ನೆಕ್ಕಿತ್ತಪುಣಿ,ಕಾಟುಕುಕ್ಕೆ,ಕೆಮ್ಮಿಂಜೆ ದೇವಸ್ಥಾನಗಳಲ್ಲೂ ಷಷ್ಠಿ ಆಚರಣೆಯಿದೆ.

Friday, November 26, 2010

ಬರಲಿದೆ "ಪ್ರಮೀಳಾರಾಜ್ಯಭಾರ"

ಮತ್ತೆ ಚುನಾವಣೆ ಭರಾಟೆ...
ಜಿಲ್ಲಾ ಪಂಚಾಯತ್,ತಾಲೂಕು ಪಂಚಾಯತ್ ಚುನಾವಣೆ ಭರಾಟೆ.
ಪಕ್ಷಗಳಲ್ಲಿ ಹಗರಣಗಳ ಮೇಲಾಟದ ಬಳಿಕ ಅಭ್ಯ್ರರ್ಥಿಗಳ ಆಯ್ಕೆಯ ಕಸರತ್ತು.
ಕಳೆದ ಬಾರಿ ಜಿ.ಪಂಚಾಯತ್ ಗೆ ಉಪಾಧ್ಯಕ್ಷರನ್ನು ಕೊಟ್ಟ ವಿಟ್ಲ ಭಾ.ಜ.ಪಕ್ಕೆ ಸ್ಥಾನವುಳಿಸುವ ತವಕ. ಎರಡು ತಾಲೂಕು ಪಂಚಾಯತು ಸ್ಥಾನಕ್ಕೆ ಮರ್ಯಾದೆ ಹೋದೀತೆ?ಎಂಬ ಅಂಜಿಕೆ.
ಹೊಸ ಬ್ಲಾಕ್ ಅಧ್ಯಕ್ಷರ ಆಯ್ಕೆಯಿಂದ ಯುವಕರ ಬಲ ಮತ್ತು ಕಳೆದ ಬಾರಿಯ ಜಿ.ಪಂ.,ತಾ.ಪಂ.,ಸದಸ್ಯರ ಅಧಿಕಾರಾವಧಿಯ "ಸಾಧನೆ"ಗಳನ್ನೇ ಬಂಡವಾಳವಾಗಿಸಿ ಚುನಾವಣೆ ಎದುರಿಸ ಹೊರಟ ಇಂದಿರಮ್ಮನ ಪಕ್ಷ!
ಇವೆಲ್ಲದರ ನಡುವೆ ಗಾದಿಯಾಸೆಯಿಂದ ಕೂತವರಿಗೆ ಈ ಸಾರಿಯ ಮೀಸಲಾತಿ ತಣ್ಣೀರೆರಚಿದ್ದರೆ-"ಮಹಿಳೆಯರಿಗೆ"ಹರುಷದ ನಗು ತಂದಿದೆ. ಇಲ್ಲಿನ 3 ಸ್ಥಾನಗಳು ಮಹಿಳೆಯರಿಗೆ ಒಲಿದಿದೆ.
ಪಕ್ಷಗಳಲ್ಲಿ ಈಗಾಗಲೇ ಲಾಬಿ ಆರಂಭವಾಗಿದೆ.ಬಿ.ಜೆ.ಪಿಗೆ ಮಾನವುಳಿಸಿಕೊಳ್ಳುವ ಚಿಂತೆ-ಕಾಂಗ್ರೆಸ್ಸಿಗೆ ಕಳೆದ ಚುನಾವಣೆನಲ್ಲಿ ಹೋದ ಮಾನ ಪಡೆಯುವ ಆಕಾಂಕ್ಷೆ...
ಯಾರೂ ಗೆದ್ದರೂ,ಯಾರು ಸೋತರೂ ಈ ಬಾರಿ ವಿಟ್ಲದಲ್ಲಿ ಪ್ರಮೀಳೆಯರ ರಾಜ್ಯಭಾರ.

Monday, November 1, 2010

ರೀ-ಎಂಟ್ರಿ

ಸುಧೀರ್ಘ ವಿರಾಮದ ನಂತರ ಭರಪೂರದ ಮಳೆಗಾಲದ ನಡುವೆ ಮತ್ತೆ ವಿಟ್ಲ ಸುತ್ತಮುತ್ತಲಿನ ಸುದ್ದಿಗಳನ್ನು ಹೆಕ್ಕಿ ತರುವ ತವಕ.
ಬದಲಾವಣೆಯ ಬಿರುಸಿಗೆ ಒಡ್ಡಿಕೊಳ್ಳುತ್ತಿರುವ ನನ್ನೂರು-ಈ ಭಾಗದ ಜನತೆ.
ಬದಲಾಗುತ್ತಿರುವ ರಾಜಕೀಯ ತಂತ್ರ-ಸಮೀಕರಣ.ಹೊತ್ತು ತಿರುಗಿದವರನ್ನೇ ಮೆಟ್ಟಿ ಮೆರೆಯಲು ವೇದಿಕೆಯಾಗುತ್ತಿರುವ ಜಿಲ್ಲಾಪಂಚಾಯತು,ತಾಲೂಕು ಪಂಚಾಯತುಗಾದಿಯ ಆಸೆ.ಇವೆಲ್ಲದರ ನಡುವೆ ನಿತ್ಯ ಅಧಿ ನಾಯಕರೆಂದು ಬೀಗುತ್ತಿರುವ ನೇತಾರರನ್ನು ನಿತ್ಯ ತರಾಟೆಗೆ ತೆಗೆದು ಕೊಳ್ಳುತ್ತಿರುವ ಮಾಧ್ಯಮದ ಮಂದಿ.
ಇವೆಲ್ಲದರ ನಡುವೆ ವಿಟ್ಲದ ಕೆಲ ಹಸಿ- ಬಿಸಿ ಸುದ್ದಿನಿಮಗಾಗಿ .