Showing posts with label ಇತಿಹಾಸ. Show all posts
Showing posts with label ಇತಿಹಾಸ. Show all posts

Friday, February 13, 2009

ವಿಟ್ಲ ಇತಿಹಾಸ





ವಿಟ್ಲದ ಬಗ್ಗೆ ನನಗೆ ಖುಶಿಪಡೋದಕ್ಕೇ ಕಾರಣ ಅದು ನನ್ನೂರೆಂಬುದು ಮಾತ್ರವಲ್ಲ.ಯಾರ ಮನಸ್ಸನ್ನು ಕೂಡಾ ಹಿಡಿದಿಡಬಲ್ಲಂತಹ ಇಲ್ಲಿನ ಇತಿಹಾಸ,ಮನವನ್ನು ಮುದಗೊಳಿಸುವ ದೈವ-ದೇವರುಗಳ ಕಾರಣೀಕ ನಿರೂಪಿಸುವ ಘಟನೆಗಳು ಇಲ್ಲಿನ ಜನರ ಬಾಯಲ್ಲಿ ನಿತ್ಯ ಕೇಳುವುದೇ ಸೊಗಸು.ಇಲ್ಲಿನ ಅರಮನೆ,ಅರಸು ವಂಶಜರ ಇತಿಹಾಸ-ಅರಮನೆ ಆಡಳಿತಕ್ಕೊಳಪಟ್ಟ ದೇಗುಲಗಳು,ಭೂತಾರಾಧನೆ ಇವೆಲ್ಲಾ ಸಾಲದೆ ಆಸಕ್ತರನ್ನು ತನ್ನತ್ತ ಸೆಳೆಯಲು?ಪ್ರತೀ ಊರಿಗೂ ಒಂದು ಇತಿಹಾಸ ,ಒಂದು ಐತಿಹ್ಯ ಇದ್ದುದೇ.ವಿಟ್ಲದ ಬಗ್ಗೇ ,ಇಲ್ಲಿನ ಅರಸು ಮನೆತನ ಬಗ್ಗೆ ೧೨೫೭ರ ವಗೆನಾಡು ಶಾಸನದಲ್ಲಿ ಉಲ್ಲೇಖವಿದೆ.ಈ ಶಾಸನದಲ್ಲಿ ತಾವು 'ಸಾಲೆ 'ಬಳಿಗೆ ಸೇರಿದವರೆಂದೂ,ಹನುಮ ಧ್ವಜಾಂಕಿತರೆಂದು ಕರೆದುಕೊಂಡಿದ್ದಾರೆ.ಈ ವಂಶದ ಆರಾಧ್ಯ ದೇವರು ವಿಟ್ಲ ಪಂಚಲಿಂಗೇಶ್ವರ.ಎಕ್ರೆಗಟ್ಟಲೆ ಭೂಮಿ ದಾನ ಮಾಡಿ ಶಾಲೆ ಕಾಲೇಜುಗಳ ಸ್ಥಾಪನೆಗೆ ನೆರವಾದವರು ಈ ವಂಶದ ಹಿರಿಯರು.ಇಂದಿಗೂ ವಿಟ್ಲದಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ.
ವಿಟ್ಲದ ಸನಿಹದಲ್ಲಿನ ಕೇಪು ಉಳ್ಳಾಲ್ತಿ ಹೆಸರುವಾಸಿ. ದಶಂಬರ ತಿಂಗಳ ಸಂಕ್ರಮಣ ಹೊತ್ತಿನ್ನಲ್ಲಿ ನಡೆಯುವ ಕಜಂಬು ಜಾತ್ರೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರನ್ನು ತನ್ನತ್ತ ಸೆಳೆಯುತ್ತದೆ.ಈ ಜಾತ್ರಾ ಸಮಯದಲ್ಲಿ ಅರಮನೆಯಿಂದ ವಾಲಗದಲ್ಲಿ ಪೆಟ್ರೋಮ್ಯಾಕ್ಸ್ ಬೆಳಕಲ್ಲಿ ಅರಸರು ಬರೋದು,ಗುತ್ತಿನ ಗುರಿಕಾರುಗಳು ನಿಂತು ಮೇಲುಸ್ತುವಾರಿ ಮಾಡಿ ಜನರನ್ನು ನಿಯಂತ್ರಣ ಮಾಡೋದು ಇನ್ನೆಲ್ಲೂ ಕಾಣಸಿಗದು.ಇದು ವಿಟ್ಲ ಸೀಮೆ ದೇಗುಲಗಳಲ್ಲಿ ಮಾತ್ರ ಕಾಣಬಹುದು .ಫೋಟೋ: ವಿಟ್ಲ ಅರಮನೆ