Showing posts with label ಮಂಗಳೂರು ಲೋಕಸಭಾ ಕ್ಷೇತ್ರ. Show all posts
Showing posts with label ಮಂಗಳೂರು ಲೋಕಸಭಾ ಕ್ಷೇತ್ರ. Show all posts

Friday, April 24, 2009

ಚುನಾವಣಾ ಕಣ -2009

ಚುನಾವಣೆ ದಿನ ಸಮೀಪಿಸುತ್ತಿದ್ದಂತೆ ವಿಟ್ಲದ ರಾಜ ಬೀದಿ ಚುನಾವಣ ಆರ್ಭಟಕ್ಕೆ ವೇದಿಕೆಯಾಗುತ್ತಿದೆ. ಮೊದಲ ಹಂತದ ಚುನಾವಣಾ ಪ್ರಚಾರ ನಂತರ ವಿವಿಧ ಪಕ್ಷಗಳ ಸ್ಟಾರ್ ಪ್ರಚಾರಕರು ವಿಟ್ಲದಲ್ಲಿ ದರ್ಶನವೀಯತೊಡಗಿದ್ದಾರೆ.
ಕಳೆದವಾರ ನಳಿನ್ ಕುಮಾರ..ಬಿ.ಜೆ.ಪಿ ಅಭ್ಯರ್ಥಿ ರೋಡ್ ಶೋಮೂಡಿ ಪ್ರಚಾರ ನಡೆಸಿದರೆ,"ಸ್ವಾಭಿಮಾನಿ" ರಾಮ ಭಟ್ ಉರಿಮಜಲು ಮನೆ-ಮನೆ ಭೇಟಿಯತ್ತ ಗಮನಕೊಡುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜನಾರ್ಧನ ಪೂಜಾರಿ ಪರ ಡಾ!ಜಿ. ಪರಮೇಶ್ವರ್ ಶುಕ್ರವಾರ ಸಂಜೆ
ಪ್ರಚಾರಸಭೆಯಲ್ಲಿ ಭಾಗವಹಿಸಿದ್ದರು.ಮುಖ್ಯಮಂತ್ರಿ ಯಡ್ಯೂರಪ್ಪ ಬಂಟ್ವಾಳ,ಪುತ್ತೂರುನಲ್ಲಿ ಬಿ.ಜೆ.ಪಿ ಪ್ರಚಾರ ಸಭೆಯಲ್ಲಿ ದಿ.೨೩-೪-೦೯ರ ಸಂಜೆ ಭಾಗವಹಿಸಿದ್ದರು.ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದಿ-೨೬-೪-೦೯ರಂದು ನೆಹರೂ ಮೈದಾನದಲ್ಲಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬಿ.ಜೆ.ಪಿ ಜಿಲ್ಲಾ ಕಾರ್ಯದರ್ಶಿ ನಳಿನ್ ಗೆಲುವನ್ನು ಪ್ರತಿಷ್ಟೆ ವಿಷಯವಾಗಿಸಿಕೊಂಡಿರುವ ಪರಿವಾರಕ್ಕೆ ರಾಮಭಟ್ ಎಷ್ಟು ಓಟು ಕಸಿಯಬಲ್ಲರೆಂಬ ಚಿಂತೆ.
ಕಾಂಗ್ರೆಸ್ ಪಾಳಯದೆಲ್ಲಾ ಗುಂಪುಗಳ ಸರ್ವ ಸಮ್ಮತ ಅಭ್ಯರ್ಥಿ ಪೂಜಾರಿ ಗೆಲುವಿನ ಕನಸು ಕಾಣುತ್ತಿದ್ದಾರೆ.ಜೊತೆಯಲ್ಲಿ ಈ ಬಾರಿ ಪುತ್ತೂರಿನ "ಸುದ್ದಿಪತ್ರಿಕೆ"ಯ ಡಾ.ಶಿವಾನಂದ ಅಭ್ಯರ್ಥಿಯಾಗಿ ಸುದ್ದಿಮಾಡಿದ್ದಾರೆ.
ಚರ್ಚ್ ದಾಳಿ,ಪಬ್ ದಾಳಿ..ಜಾತಿ ಮತಗಳ ಹಂಚಿಕೆ ಅಭ್ಯರ್ಥಿಗಳ ಭವಿಷ್ಯ ನಿರ್ಣಯಿಸಲಿದೆ.ಚುನಾವಣಾ ನೀತಿ ಸಂಹಿತೆಯ ಬಿಸಿ ಎಲ್ಲ ಪಕ್ಷಗಳಿಗು ತಟ್ಟಿದ್ದು ಈ ಬಾರಿ..ಮೈಕ್-ಬ್ಯಾನರ್ ಭರಾಟೆಯೇ ಇಲ್ಲದೆ ಮತದಾರ ನಿರಾಳವಾಗಿದ್ದಾನೆ