ಸುದ್ದಿಮನೆಗಳಲ್ಲಿ ಇತ್ತೀಚೆಗಿನ ದಿನಗಳಲ್ಲಿ ವಿಟ್ಲ (ಕು)ಖ್ಯಾತವಾಗಿದ್ದು ಜೀತದಾಳು ಪ್ರಕರಣದಲ್ಲಿ.
ಉಕ್ಕುಡ ಸನಿಹದ ವರಪಾದೆಯಲ್ಲಿನ ಕಪ್ಪು ಕಲ್ಲಿನ ಕೋರೆಯಲ್ಲಿನ 39ಜೀತದಾಳುಗಳನ್ನು ದಶಂಬರ೨ರಂದು ಪತ್ತೆಹಚ್ಚಿದ ಅಸಿಸ್ಟೆಂಟ್ ಕಮಿಶನರ ಪ್ರಭುಲಿಂಗ ಕಾವಳಿಕಟ್ಟಿ ನೇತೄತ್ವದ ತಂಡ ಬಳಿಕ ಕೋರೆ ಲೈಸನ್ಸ್ ಕೂಡ ರದ್ದು ಮಾಡಿದೆ.ಈ ಪ್ರಕರಣದಲ್ಲಿ ಮಾಧ್ಯಮದ ಮಂದಿ ತೋರಿದ ಆಸಕ್ತಿ ಕೋರೆ ಮಾಲಿಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇಂಟರ್ ನ್ಯಾಶನಲ್ ಜಸ್ಟಿಸ್ ಮಿಶನ್ ಎಂಬ ಸರಕಾರೇತರ ಸಂಸ್ಥೆಯ ಪ್ರಯತ್ನದ ಫಲವಾಗಿ ಈ ಪ್ರಕರಣ ಹೊರಬಂದಿದೆ
ಪ್ರಜಾವಾಣಿ ಈ ಜೀತ ಉದ್ಯಮದ ಬಗ್ಗೆ ನಿತ್ಯ "ಜೀತ ಜೀವಂತ " ಅಂಕಣದ ಮೂಲಕ ಬೆಂಕಿ ಕಾರುತ್ತಿದೆ.
ವಿ.ಕ.ಮತ್ತಿತರ ಪತ್ರಿಕೆಗಳಲ್ಲಿ,"ಹಿಂದೂ" ದೈನಿಕದಲ್ಲಿ ಕೂಡ ಮುಖಪುಟದಲ್ಲಿ ಈ ಸುದ್ದಿ ರಾರಾಜಿಸಿದೆ.
ಕಾನೂನಿನ ಮುಷ್ಟಿ ಬಿಗಿಯಾಗಿದೆ.ಸದ್ಯ ಎಲ್ಲ ಕೋರೆ ಮಾಲಕರ ಚಿಂತೆ..ಯಾವ ಇಲಾಖೆಗಳಿಗೆ ಎಲ್ಲಿ- ಎಲ್ಲಿ ಮದ್ದು ಇಡಬೇಕೆಂಬುದು?
Showing posts with label VITLAnews. Show all posts
Showing posts with label VITLAnews. Show all posts
Thursday, December 9, 2010
Subscribe to:
Posts (Atom)
