ಮತ್ತೆ ಚುನಾವಣೆ ಭರಾಟೆ...
ಜಿಲ್ಲಾ ಪಂಚಾಯತ್,ತಾಲೂಕು ಪಂಚಾಯತ್ ಚುನಾವಣೆ ಭರಾಟೆ.
ಪಕ್ಷಗಳಲ್ಲಿ ಹಗರಣಗಳ ಮೇಲಾಟದ ಬಳಿಕ ಅಭ್ಯ್ರರ್ಥಿಗಳ ಆಯ್ಕೆಯ ಕಸರತ್ತು.
ಕಳೆದ ಬಾರಿ ಜಿ.ಪಂಚಾಯತ್ ಗೆ ಉಪಾಧ್ಯಕ್ಷರನ್ನು ಕೊಟ್ಟ ವಿಟ್ಲ ಭಾ.ಜ.ಪಕ್ಕೆ ಸ್ಥಾನವುಳಿಸುವ ತವಕ. ಎರಡು ತಾಲೂಕು ಪಂಚಾಯತು ಸ್ಥಾನಕ್ಕೆ ಮರ್ಯಾದೆ ಹೋದೀತೆ?ಎಂಬ ಅಂಜಿಕೆ.
ಹೊಸ ಬ್ಲಾಕ್ ಅಧ್ಯಕ್ಷರ ಆಯ್ಕೆಯಿಂದ ಯುವಕರ ಬಲ ಮತ್ತು ಕಳೆದ ಬಾರಿಯ ಜಿ.ಪಂ.,ತಾ.ಪಂ.,ಸದಸ್ಯರ ಅಧಿಕಾರಾವಧಿಯ "ಸಾಧನೆ"ಗಳನ್ನೇ ಬಂಡವಾಳವಾಗಿಸಿ ಚುನಾವಣೆ ಎದುರಿಸ ಹೊರಟ ಇಂದಿರಮ್ಮನ ಪಕ್ಷ!
ಇವೆಲ್ಲದರ ನಡುವೆ ಗಾದಿಯಾಸೆಯಿಂದ ಕೂತವರಿಗೆ ಈ ಸಾರಿಯ ಮೀಸಲಾತಿ ತಣ್ಣೀರೆರಚಿದ್ದರೆ-"ಮಹಿಳೆಯರಿಗೆ"ಹರುಷದ ನಗು ತಂದಿದೆ. ಇಲ್ಲಿನ 3 ಸ್ಥಾನಗಳು ಮಹಿಳೆಯರಿಗೆ ಒಲಿದಿದೆ.
ಪಕ್ಷಗಳಲ್ಲಿ ಈಗಾಗಲೇ ಲಾಬಿ ಆರಂಭವಾಗಿದೆ.ಬಿ.ಜೆ.ಪಿಗೆ ಮಾನವುಳಿಸಿಕೊಳ್ಳುವ ಚಿಂತೆ-ಕಾಂಗ್ರೆಸ್ಸಿಗೆ ಕಳೆದ ಚುನಾವಣೆನಲ್ಲಿ ಹೋದ ಮಾನ ಪಡೆಯುವ ಆಕಾಂಕ್ಷೆ...
ಯಾರೂ ಗೆದ್ದರೂ,ಯಾರು ಸೋತರೂ ಈ ಬಾರಿ ವಿಟ್ಲದಲ್ಲಿ ಪ್ರಮೀಳೆಯರ ರಾಜ್ಯಭಾರ.
Subscribe to:
Post Comments (Atom)

No comments:
Post a Comment