

ಮಳೆಗಾಲದ ಆರಂಭಕ್ಕೇ ಕೆಟ್ಟು ಕೆರಹಿಡಿದಿದ್ದ ವಿಟ್ಲ ಪೇಟೆಯ ರಸ್ತೆಹರಿದು ಚಿಂದಿಯಾಗಿವೆ.ಪುತ್ತೂರು ರಸ್ತೆಯಲ್ಲಿನ ಬಸ್ ಸ್ಟ್ಯಾಂಡ್ ಬಳಿ ಸಣ್ಣಕೆರೆಯೇ ರಸ್ತೆ ಮಧ್ಯದಲ್ಲಿ..ಸುರಿವ ಮಳೆಗೆ ರಸ್ತೆಗಳೆಲ್ಲಾ ಹೊಳೆಯಾಗುತ್ತದೆ.
ಇವೆಲ್ಲದರ ಜೊತೆ ನಾಲ್ಕು ಮಾರ್ಗ ಸೇರುವಲ್ಲೆ ಮಂಗಳೂರು ರಸ್ತೆ ಬಾಯ್ಬಿಟ್ಟಿದೆ.ದಿನಕ್ಕೊಂದರಂತೆ ವಾಹನಗಳು ಈ ಕೂಪಕ್ಕೆ ಬೀಳುತ್ತಿವೆ..ಮೊನ್ನೆ ಕಾರು,ನಿನ್ನೆ ಟಿಪ್ಪರ್ ಲಾರಿ -ದಬಕ್ ದಬಕ್ ಐಸಾ ಎಂದು ನೂಕಿದರೂ ಜಗ್ಗದ ಲಾರಿಯನ್ನು ಬೇರೊಂದು ಲಾರಿಯಲ್ಲಿ ಎಳೆದು ಮೇಲೆ ತರುವಲ್ಲಿ ಗೆ ಮುಕ್ಕಾಲು ಘಂಟೆ ರೋಡ್ ಬ್ಲಾಕ್.

No comments:
Post a Comment