Tuesday, April 14, 2009

ನಿಧಿಸಂಚಯನ-೨೦೦೯


ವಿಟ್ಲದ ಪಂಚಲಿಂಗೇಶ್ವರ ದೇಗುಲದಲ್ಲಿ ಪ್ರತೀ ವರ್ಷ ವಿಷು ಸಂಕ್ರಮಣ ದಿನ ನಡೆಯುವ ನಿಧಿ ಸಂಚಯನ ಕಾರ್ಯಕ್ರಮ ಎಪ್ರಿಲ್ ೧೩ರಂದು ದೇವಸ್ಥಾನದೆದುರಿನ ರಥದ ಗದ್ದೆಯಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಅದ್ದೂರಿಯಾಗಿ ನಡೆಯಿತು.
ಜೀರ್ಣೋದ್ಧಾರಗೊಳ್ಳುತ್ತಿರುವ ದೇವಳದಲ್ಲಿ ಪ್ರತೀ ವಿಷುವಿನಂದು ಭಕ್ತಾದಿಗಳೆಲ್ಲಾ ಸೇರಿ ಕೄಷ್ಯುತ್ಪನ್ನಗಳನ್ನು ಸಂಗ್ರಹಿಸುವ ಮೂಲಕ ೪ ಕೋಟಿ ಮಿಕ್ಕಿ ಧನವನ್ನು ದೇಗುಲದ ಕೆಲಸಕ್ಕಾಗಿ ಅರ್ಪಿಸಿದ್ದು ದಾಖಲೆಯೆ ಸರಿ.ಅದರ ಜೊತೆಗೆ ಈ ಸಾರಿ ಅನೇಕ ಸ್ಥಳೀಯ ಸಂಸ್ಥೆಗಳು ,ಯುವಕ ಮಂಡಲಗಳು,ಸಂಘಗಳು ಕೂಡ ಈ ಬಾರಿ ದೇಣಿಗೆ ಸಮರ್ಪಿಸಿದವು.
ಈ ಬಾರಿಯ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರಿ ಮಹಾವೀರ ಅಜ್ರಿ,ಮಂಗಳೂರಿನ ನ್ಯಾಯವಾದಿ ಶ್ರೀಪಿ.ಪಿ.ಹೆಗ್ಡೆ,ವಿಟ್ಲ ಪಡ್ನೂರಿನ ರವಿಶಂಕರ್ ಬಲಿಪಗುಳಿ,ನಳಿನಿ ಲೋಕಪ್ಪ ಗೌಡ,ಪುತ್ತೂರಿನ ಶಾಸಕಿ ಮಲ್ಲಿಕಾ ಪ್ರಸಾದ್-ಮತ್ತು ಮುಂಬೈ,ಬೆಂಗಳೂರು ಕಮಿಟಿಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು.
ವಿಟ್ಲದ ಪಂಚಲಿ0ಗೇಶ್ವರ ದೇಗುಲದ ಆನುವಂಶಿಕ ಮೊಕ್ತೇಸರ ಜನಾರ್ಧನ ವರ್ಮ ಅರಸರು ಶುಭ ಹಾರೈಕೆಯ ನುಡಿಗಳನ್ನಾಡಿದರು..ಮೋಹನದಾಸ ಸ್ವಾಮೀಜಿ ಮಾಣಿಲ ಆಶೀರ್ವಚನವಿತ್ತರು.ಎಲ್.ಎನ್.ಕೂಡೂರು,ಜನಾರ್ಧನ ಪೈ ಉಪಸ್ಥಿತರಿದ್ದರು.
ಈ ಬಾರಿಯೂ ಅಧಿಕ ಮೊತ್ತದ ನಿಧಿ ಸಂಗ್ರಹದ ನಿರೀಕ್ಷೆಯಿದೆ.
ಕಾರ್ಯಕ್ರಮದ ಅತಿಥಿಗಳೊಬ್ಬರಾದ ಮಹಾವೀರ ಅಜ್ರಿ-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೄದ್ಧಿ ಯೋಜನೆಯ ನಿರ್ದೇಶಕರು ಹಿಡಿಯಕ್ಕಿ ಯೋಜನೆಗೆ ಚಾಲನೆ ನೀಡ ಬೇಕೆಂದೂ ಸಲಹೆ ನೀಡಿ -ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ದೇಗುಲ ನಿರ್ಮಾಣದಲ್ಲಿ ಇದರಿಂದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಲು ಸಾಧ್ಯವೆಂದು ತಮ್ಮ ಆಶಯ ಮುಂದಿಟ್ಟರು .ಕೂಡಲೆ ಸಭೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮಾಭಿವೃದ್ಧಿ ಯೋಜನೆಯ ಬಂಧುಗಳು-ಹಿಡಿಯಕ್ಕಿ ಯೋಜನೆಗೆ ಚಾಲನೆ ನೀಡಿದರು.ಒಕ್ಕೂಟದ ಅಧ್ಯಕ್ಷರಾದ ಜಯಕರ ಅಮೈ ಈ ಬಗ್ಗೆ ಘೋಷಣೆ ಮಾಡಿದರು.
(photo-ಸಭಾ ಕಾರ್ಯಕ್ರಮ)

No comments:

Post a Comment