
ವಿಟ್ಲದ ಪಂಚಲಿಂಗೇಶ್ವರ ದೇಗುಲದಲ್ಲಿ ಪ್ರತೀ ವರ್ಷ ವಿಷು ಸಂಕ್ರಮಣ ದಿನ ನಡೆಯುವ ನಿಧಿ ಸಂಚಯನ ಕಾರ್ಯಕ್ರಮ ಎಪ್ರಿಲ್ ೧೩ರಂದು ದೇವಸ್ಥಾನದೆದುರಿನ ರಥದ ಗದ್ದೆಯಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಅದ್ದೂರಿಯಾಗಿ ನಡೆಯಿತು.
ಜೀರ್ಣೋದ್ಧಾರಗೊಳ್ಳುತ್ತಿರುವ ದೇವಳದಲ್ಲಿ ಪ್ರತೀ ವಿಷುವಿನಂದು ಭಕ್ತಾದಿಗಳೆಲ್ಲಾ ಸೇರಿ ಕೄಷ್ಯುತ್ಪನ್ನಗಳನ್ನು ಸಂಗ್ರಹಿಸುವ ಮೂಲಕ ೪ ಕೋಟಿ ಮಿಕ್ಕಿ ಧನವನ್ನು ದೇಗುಲದ ಕೆಲಸಕ್ಕಾಗಿ ಅರ್ಪಿಸಿದ್ದು ದಾಖಲೆಯೆ ಸರಿ.ಅದರ ಜೊತೆಗೆ ಈ ಸಾರಿ ಅನೇಕ ಸ್ಥಳೀಯ ಸಂಸ್ಥೆಗಳು ,ಯುವಕ ಮಂಡಲಗಳು,ಸಂಘಗಳು ಕೂಡ ಈ ಬಾರಿ ದೇಣಿಗೆ ಸಮರ್ಪಿಸಿದವು.
ಈ ಬಾರಿಯ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರಿ ಮಹಾವೀರ ಅಜ್ರಿ,ಮಂಗಳೂರಿನ ನ್ಯಾಯವಾದಿ ಶ್ರೀಪಿ.ಪಿ.ಹೆಗ್ಡೆ,ವಿಟ್ಲ ಪಡ್ನೂರಿನ ರವಿಶಂಕರ್ ಬಲಿಪಗುಳಿ,ನಳಿನಿ ಲೋಕಪ್ಪ ಗೌಡ,ಪುತ್ತೂರಿನ ಶಾಸಕಿ ಮಲ್ಲಿಕಾ ಪ್ರಸಾದ್-ಮತ್ತು ಮುಂಬೈ,ಬೆಂಗಳೂರು ಕಮಿಟಿಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು.
ವಿಟ್ಲದ ಪಂಚಲಿ0ಗೇಶ್ವರ ದೇಗುಲದ ಆನುವಂಶಿಕ ಮೊಕ್ತೇಸರ ಜನಾರ್ಧನ ವರ್ಮ ಅರಸರು ಶುಭ ಹಾರೈಕೆಯ ನುಡಿಗಳನ್ನಾಡಿದರು..ಮೋಹನದಾಸ ಸ್ವಾಮೀಜಿ ಮಾಣಿಲ ಆಶೀರ್ವಚನವಿತ್ತರು.ಎಲ್.ಎನ್.ಕೂಡೂರು,ಜನಾರ್ಧನ ಪೈ ಉಪಸ್ಥಿತರಿದ್ದರು.
ಈ ಬಾರಿಯೂ ಅಧಿಕ ಮೊತ್ತದ ನಿಧಿ ಸಂಗ್ರಹದ ನಿರೀಕ್ಷೆಯಿದೆ.
ಕಾರ್ಯಕ್ರಮದ ಅತಿಥಿಗಳೊಬ್ಬರಾದ ಮಹಾವೀರ ಅಜ್ರಿ-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೄದ್ಧಿ ಯೋಜನೆಯ ನಿರ್ದೇಶಕರು ಹಿಡಿಯಕ್ಕಿ ಯೋಜನೆಗೆ ಚಾಲನೆ ನೀಡ ಬೇಕೆಂದೂ ಸಲಹೆ ನೀಡಿ -ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ದೇಗುಲ ನಿರ್ಮಾಣದಲ್ಲಿ ಇದರಿಂದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಲು ಸಾಧ್ಯವೆಂದು ತಮ್ಮ ಆಶಯ ಮುಂದಿಟ್ಟರು .ಕೂಡಲೆ ಸಭೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮಾಭಿವೃದ್ಧಿ ಯೋಜನೆಯ ಬಂಧುಗಳು-ಹಿಡಿಯಕ್ಕಿ ಯೋಜನೆಗೆ ಚಾಲನೆ ನೀಡಿದರು.ಒಕ್ಕೂಟದ ಅಧ್ಯಕ್ಷರಾದ ಜಯಕರ ಅಮೈ ಈ ಬಗ್ಗೆ ಘೋಷಣೆ ಮಾಡಿದರು.
(photo-ಸಭಾ ಕಾರ್ಯಕ್ರಮ)