
ಓಟಿಗಾಗಿ ಓಟ-ಏನಿದು ಅಂದ್ಕೋಂಡ್ರಾ.....?
ಇದು ಸಾಲಮೇಳದ ಸರದಾರ - ಬಿ.ಸಿ.ರೋಡಿನ "ಚೆನ್ನಮ್ಮ ಕುಟೀರ"ದ ೭೨ರ ತರುಣ ಜನಾರ್ಧನ ಪೂಜಾರಿ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಚಾರ ಮಾಡೋ ಸ್ಟೈಲು.
ವಿಟ್ಲದ ಪೇಟೆಯಲ್ಲಿ ಮಂಗಳೂರು ರಸ್ತೆಯಲ್ಲಿನ ಕಾಂಗ್ರೆಸ್ಸ್ ಪಕ್ಷದ ಕಛೇರಿಗೆ ಆಗಮಿಸಿದ ಜನಾರ್ಧನ ಪೂಜಾರಿ ಸಂಜೆ ೬ಘಂಟೆ ಸುಮಾರಿಗೆ ಪ್ರಮುಖ ಬೀದಿಗಳಲ್ಲಿ ಪ್ರಚಾರ ಶುರುವಿಟ್ಟದ್ದೆ ಓಟದೊಂದಿಗೆ! ಇಡೀ ಪೇಟೆಗೆ ಕೇವಲ ೧೦-೧೫ ನಿಮಿಷಗಳಲ್ಲಿ ಪ್ರದಕ್ಷಿಣೆ ಬಂದು...ಮತದಾರರೆಲ್ಲ ಮತಯಾಚಿಸಿದ ಪೂಜಾರಿಯವರನ್ನು ಹಿಂಬಾಲಿಸಿದ ಕಾರ್ಯಕರ್ತರು ಓಡುತ್ತ,ಓಡುತ್ತ ಸುಸ್ತಾದರು.
ವಿಟ್ಲದಲ್ಲಿದ್ದ ಜನಾರ್ಧನ ಪೂಜಾರಿಯವರು ನನ್ನ ಕ್ಯಾಮರಾಕ್ಕೆ ವಿಟ್ಲ-ಪುತ್ತೂರು ಮುಖ್ಯ ರಸ್ತೆಯಲ್ಲಿ ಪೋಸ್ ನೀಡಿದ್ದು ಹೀಗೆ.
ಫೋಟೊ: ಪುತ್ತೂರು-ವಿಟ್ಲ ಮುಖ್ಯ ರಸ್ತೆಯಲ್ಲಿ ಬಿ.ಜನಾರ್ಧನ ಪೂಜಾರಿ
