Monday, November 1, 2010

ರೀ-ಎಂಟ್ರಿ

ಸುಧೀರ್ಘ ವಿರಾಮದ ನಂತರ ಭರಪೂರದ ಮಳೆಗಾಲದ ನಡುವೆ ಮತ್ತೆ ವಿಟ್ಲ ಸುತ್ತಮುತ್ತಲಿನ ಸುದ್ದಿಗಳನ್ನು ಹೆಕ್ಕಿ ತರುವ ತವಕ.
ಬದಲಾವಣೆಯ ಬಿರುಸಿಗೆ ಒಡ್ಡಿಕೊಳ್ಳುತ್ತಿರುವ ನನ್ನೂರು-ಈ ಭಾಗದ ಜನತೆ.
ಬದಲಾಗುತ್ತಿರುವ ರಾಜಕೀಯ ತಂತ್ರ-ಸಮೀಕರಣ.ಹೊತ್ತು ತಿರುಗಿದವರನ್ನೇ ಮೆಟ್ಟಿ ಮೆರೆಯಲು ವೇದಿಕೆಯಾಗುತ್ತಿರುವ ಜಿಲ್ಲಾಪಂಚಾಯತು,ತಾಲೂಕು ಪಂಚಾಯತುಗಾದಿಯ ಆಸೆ.ಇವೆಲ್ಲದರ ನಡುವೆ ನಿತ್ಯ ಅಧಿ ನಾಯಕರೆಂದು ಬೀಗುತ್ತಿರುವ ನೇತಾರರನ್ನು ನಿತ್ಯ ತರಾಟೆಗೆ ತೆಗೆದು ಕೊಳ್ಳುತ್ತಿರುವ ಮಾಧ್ಯಮದ ಮಂದಿ.
ಇವೆಲ್ಲದರ ನಡುವೆ ವಿಟ್ಲದ ಕೆಲ ಹಸಿ- ಬಿಸಿ ಸುದ್ದಿನಿಮಗಾಗಿ .