
ವಿಟ್ಲದ ಇತಿಹಾಸ ,ಇಲ್ಲಿನ ಜಾನಪದ ವೈವಿಧ್ಯ,ಸಾಮರಸ್ಯದ ಬದುಕು ಬಯಸುವ ಜನತೆ...ಇವೆಲ್ಲದರ ಜೊತೆಜೊತೆಯಲ್ಲಿ ಪರಿಸರದಲ್ಲಿ ವರ್ಷಪೂರ್ತಿ ವಿಜೄಂಭಿಸುವ ಧಾರ್ಮಿಕ ಸಮಾರಂಭಗಳು,ಆಚರಣೆಗಳು ಈ ಭಾಗದ ಜನರ ನಿತ್ಯದ ಬದುಕನ್ನು ವರ್ಣಮಯವನ್ನಾಗಿಸಿದೆ. ಭೂತಾರಾಧನೆಯ ವಿವಿಧ ಪ್ರಕಾರಗಳು,ದೇವ-ದೈವಾರಾಧನೆಯಲ್ಲಿ, ಶಿವ-ವೈಷ್ಣವ ಆರಾಧನೆಯಲ್ಲಿ ಭೇದವೆಣಿಸದೆ ಆರಾಧಿಸುವ ಸಂಪ್ರದಾಯ ಇಲ್ಲಿನ ಜನರ ಮನಸ್ಸಿನ ಶ್ರೀಮಂತಿಕೆಯ ಪ್ರತೀಕ. ಇಂದು ವಿವಿಧ ನಂಬಿಕೆಗಳ,ಪಂಗಡಗಳ ಶ್ರದ್ಧಾ ಕೇಂದ್ರಗಳು ವಿಟ್ಲದಲ್ಲಿವೆ.ಸೀಮೆಯ ದೇವರಾದ ಪಂಚಲಿಂಗೇಶ್ವರ,ಚಿತ್ರಾಪುರ ಮಠಾಡಳಿತದ ಶ್ರೀಮತ್ ಅನಂತೇಶ್ವರ ದೇವಸ್ಥಾನ,ವಿಠೋಬ ಮಂದಿರ,ಭಗವತಿ ದೇಗುಲ, ರಾಮ ಮಂದಿರ, ಅಯ್ಯಪ್ಪ ದೇವಸ್ಥಾನ ಹೀಗೆ ಅನೇಕ ದೇವಾಲಯಗಳಲ್ಲದೆ,ಮುಸ್ಲಿಮ್-ಕ್ರಿಶ್ಚಿಯನ್ನರ ಪ್ರಾರ್ಥನಾ ಮಂದಿರಗಳು ಕೂಡಾ ಇಲ್ಲಿವೆ. ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಮಕರ ಸಂಕ್ರಮಣದಿಂದ ಆರಂಭಗೊಳ್ಳುವ ಪಂಚಲಿಂಗೇಶ್ವರದೇವರ ಜಾತ್ರೆ ,ಉತ್ಸವಗಳಲ್ಲಿ ಊರಿನ ಜನ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.ಸುಬ್ರಹ್ಮಣ್ಯ ಷಷ್ಟಿ ಸಂದರ್ಭದಲ್ಲಿ ಅನಂತೇಶ್ವರ ದೇಗುಲ ಜಾತ್ರೆ ನಡೆಯುತ್ತದೆ.ಪ್ರತಿ ದಶಂಬರ ತಿಂಗಳ ಕೊನೆಯ ವಾರದಲ್ಲಿ ಅಯ್ಯಪ್ಪ ದೇವಸ್ಥಾನದ ಜಾತ್ರೆ.ಇವೆಲ್ಲದರ ನಡುವೆ ವಿಷು, ಕೄಷ್ಣ ಜನ್ಮಾಷ್ಟಮಿ,ಗಣೇಶೋತ್ಸವ,ಶಾರದೋತ್ಸವ, ಹೀಗೆ ವರ್ಷ ಪೂರ್ತಿ ಧಾರ್ಮಿಕ ಆಚರಣೆಗಳು ಇಲ್ಲಿನ ಜನರ ಬದುಕಿನ ರಭಸಕ್ಕೆ ಹೊಂದಿಕೊಂಡತಿದೆ. ಅನಂತಾಡಿ,ಕೆಲಿಂಜ,ಮಾಣಿ ಭೂತಾರಾಧನೆಯ ಕೇಂದ್ರಗಳಾಗಿ ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ಜನರನ್ನು ಸೆಳೆಯುತ್ತಿವೆ. ಸಾಂಸ್ಕೄತಿಕವಾಗಿ ,ಶೈಕ್ಷಣಿಕವಾಗಿ ಕೂಡಾ ಈ ಪ್ರದೇಶದಲ್ಲಿ ವಿಶೇಷ ಸಾಧನೆಗಳು ಜನಮನ್ನಣೆಗೆ ಪಾತ್ರವಾಗಿವೆ. ಇಲ್ಲಿನ ಎಲಿಮೆಂಟರಿ ಶಾಲೆ ಎಂದೆ ಹೆಸರಾದ ಸರಕಾರಿ ಮಾದರಿ ಶಾಲೆ,ಜೂನಿಯರ್ ಕಾಲೇಜು,ಅಳಿಕೆಯ ಸತ್ಯಸಾಯಿ ವಿದ್ಯಾ ಸಂಸ್ಥೆಗಳು,ಜೇಸಿಸ್ ಆಂಗ್ಲ ಮಾಧ್ಯಮ ಸೈಂಟ್ ರೀಟಾ ಶೈಕ್ಷಣಿಕ ಸಂಸ್ಥೆಗಳು ಪದವಿ ಕಾಲೇಜು,ತಾಂತ್ರಿಕ ತರಬೇತಿ ಸಂಸ್ಥೆ ವಿದ್ಯಾರ್ಥಿಗಳಲ್ಲಿನ ಅಕ್ಷರ ದಾಹವನ್ನು ತಣಿಸುತ್ತಿವೆ.



